Monthly Archives: ಜುಲೈ 2015
ಚಳಿಗಾಲದ ಅಧಿವೇಶನ ಮತ್ತು ಉತ್ತರ ಕರ್ನಾಟಕದ ಸಮಸ್ಯೆಗಳ ಮೂಲ
ಬೆಳಗಾವಿ ಮತ್ತು ಬೆಂಗಳೂರಿನಲ್ಲಿ ವಿಧಾನಸಭೆಯ ಚಳಿಗಾಲದ ಅಧಿವೇಶನ ಜರುಗಿದೆ. ಕಬ್ಬಿನ ಬೆಳೆಗಾರರ ಸಮಸ್ಯೆ, ಲೋಕಾಯುಕ್ತರ ಭ್ರಷ್ಟಾಚಾರದ ಪ್ರಕರಣ, ರೈತರ ಆತ್ಮಹತ್ಯೆಯಂತಹ ವಿಷಯಗಳು ಅಧಿವೇಶನದಲ್ಲಿ ಹೆಚ್ಚಿನ ಚರ್ಚೆಗೊಳಗಾದವು. ಜೊತೆಯಲ್ಲೇ, ಶಾಸಕ ನಡಹಳ್ಳಿಯವರು ಉತ್ತರ ಕರ್ನಾಟಕ ಪ್ರತ್ಯೇಕತೆ ಹೋರಾಟದ ಪರ ದನಿ ಎತ್ತಿದ್ದ ಹೊತ್ತಿನಲ್ಲೇ ನಡೆದ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆಗಳ ಬಗೆಗಿನ ಚರ್ಚೆ ಹೇಗಿತ್ತು, ಚರ್ಚೆಗಳಲ್ಲಿ ಏನಾಯಿತು … ಓದನ್ನು ಮುಂದುವರೆಸಿ
ಕನ್ನಡ ಲಿಪಿ ಮಾರ್ಪಡಿಸುವ ಚರ್ಚೆಗೆ ಇದು ಸರಿಯಾದ ಹೊತ್ತು
ಪ್ರಜಾವಾಣಿಯಲ್ಲಿ ಇತ್ತೀಚಿಗೆ ಕನ್ನಡದಲ್ಲಿನ ಮಹಾಪ್ರಾಣಗಳ ಬಳಕೆ ಬಗ್ಗೆ ಹೆಚ್ಚು ಚರ್ಚೆ ನಡೆಯುತ್ತಿದೆ. ಅದನ್ನು ಹುಟ್ಟು ಹಾಕಿದ್ದು ನಾಗೇಶ್ ಹೆಗಡೆಯವರು. ಜುಲೈ 7 ರ ಪ್ರಜಾವಾಣಿಯಲ್ಲಿ ನಾಗೇಶ್ ಹೆಗಡೆಯವರು ಬರೆದಿರುವ ಓಲೆಯೊಂದು ಮೂಡಿಬಂದಿತ್ತು. ಕನ್ನಡ ಮಾದ್ಯಮ ಪಠ್ಯಪುಸ್ತಕಗಳಲ್ಲಿ ಉಂಟಾಗಿರುವ ಕಾಗುಣಿತ ತಪ್ಪುಗಳ ಬಗ್ಗೆ ಆ ಓಲೆಯಲ್ಲಿ ಹೇಳಲಾಗಿತ್ತು. ಆ ಓಲೆಯನ್ನು ಕೆಳಗೆ ನೋಡಬಹುದು. ಜುಲೈ 7 ವಾಚಕರ ವಾಣಿಯಲ್ಲಿ ಬಂದ ನಾಗೇಶ್ ಹೆಗಡೆಯವರ ಓಲೆ ಅವರ ಓಲೆಯಲ್ಲಿ ಹೆಸರಿಸಿದ ತಪ್ಪುಗಳೆಲ್ಲವೂ ಮಹಾಪ್ರಾಣಗಳ … ಓದನ್ನು ಮುಂದುವರೆಸಿ
ಕರ್ನಾಟಕದಲ್ಲಿ ತೆಲುಗು ಸಿನೆಮಾಗಳನ್ನು ನೋಡುತ್ತಿರುವವರು ಯಾರು?
ಬಾಹುಬಲಿ ಅನ್ನುವ ತೆಲುಗು ಚಿತ್ರ ಕರ್ನಾಟಕದಲ್ಲಿ ಇನ್ನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆ ಕಂಡಿದೆ. ಕನ್ನಡಕ್ಕೆ ಡಬ್ಬಿಂಗ್ ಬಂದರೆ ಕನ್ನಡಕ್ಕೂ, ಕನ್ನಡ ಸಂಸ್ಕೃತಿಗೂ ತೊಂದರೆ ಅನ್ನುವ ವಾದ ಮಾಡುತ್ತಿದ್ದ ನಿರ್ಮಾಪಕರೇ ಈ ಚಿತ್ರವನ್ನು ಕರ್ನಾಟಕದೆಲ್ಲೆಡೆ ತೆರೆಕಾಣಿಸಿ “ಕನ್ನಡದ ಸೇವೆ”ಗೈದಿರುವುದು ಇನ್ನೊಂದು ವಿಶೇಷ. ಈ ಹೊತ್ತಿನಲ್ಲಿ ಕನ್ನಡದಲ್ಲಿ ಡಬ್ಬಿಂಗ್ ನಿಷೇಧದ ಔಚಿತ್ಯವನ್ನು ಪ್ರಶ್ನಿಸಬೇಕಾದ ಅಗತ್ಯ ನಮ್ಮ ಮುಂದಿದೆ. ಮೊದಲಿಗೆ, … ಓದನ್ನು ಮುಂದುವರೆಸಿ
ನಡಹಳ್ಳಿ ಪಾದಯಾತ್ರೆ – ದಕ್ಷಿಣ ಕರ್ನಾಟಕ ಅನ್ನುವ ಇಲ್ಲದ ಶತ್ರುವನ್ನು ಹುಟ್ಟು ಹಾಕುವ ಯತ್ನ
ಉತ್ತರ ಕರ್ನಾಟಕವನ್ನು ಪ್ರತ್ಯೇಕ ರಾಜ್ಯ ಮಾಡಿ, ಅದರ ಮೊದಲ ಮುಖ್ಯಮಂತ್ರಿಯಾಗಬೇಕು ಅನ್ನುವ ಕನಸು ಹೊತ್ತಂತೆ ಕಾಣುತ್ತಿರುವ ನಡಹಳ್ಳಿಯವರು ಇತ್ತೀಚೆಗೆ ವಿಜಯಪುರದಿಂದ ರಾಯಚೂರಿನವರೆಗೆ ಪಾದಯಾತ್ರೆಯೊಂದನ್ನು ಹಮ್ಮಿಕೊಂಡಿದ್ದರು. ಈ ಪಾದಯಾತ್ರೆಯ ಗುರಿ ನಂಜುಂಡಪ್ಪ ವರದಿಯ ಅನುಷ್ಟಾನಕ್ಕೆ ಒತ್ತಾಯ ತರುವುದು ಎಂದು ಹೇಳಲಾಗಿದ್ದರೂ ಪ್ರತ್ಯೇಕ ಉತ್ತರ ಕರ್ನಾಟಕದ ಬಾವುಟ, ನಕ್ಷೆ ಸಿದ್ದಪಡಿಸಿಕೊಂಡು ಹಾದಿಯುದ್ದಕ್ಕೂ ದಕ್ಷಿಣ ಕರ್ನಾಟಕವನ್ನು ದೂರುತ್ತ ಸಾಗಿದ ರೀತಿ … ಓದನ್ನು ಮುಂದುವರೆಸಿ
ಬಾಹುಬಲಿಗೆ ರಂಗೀತರಂಗ ಬಲಿ ಮತ್ತು ಡಬ್ಬಿಂಗ್ ನಿಷೇಧ
ಬಾಹುಬಲಿ ಅನ್ನುವ ತೆಲುಗು ಸಿನೆಮಾ ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಭಾಷೆಯಲ್ಲಿ ಕರ್ನಾಟಕದ ಇನ್ನೂರು ಚಿತ್ರಮಂದಿರಗಳಲ್ಲಿ ನಾಳೆ ಬಿಡುಗಡೆಯಾಗುತ್ತಿದೆ. ಇತ್ತೀಚಿನ ದಿನಗಳಲ್ಲೇ ಕನ್ನಡದಲ್ಲಿ ಬಂದ ಅತ್ಯುತ್ತಮ ಚಿತ್ರ ಅನ್ನುವ ಹೆಸರು ಗಳಿಸಿದ್ದ ರಂಗೀತರಂಗ ಚಿತ್ರ ಬಾಹುಬಲಿಯ ಹಣಬಲದ ಮುಂದೆ ಸ್ಪರ್ಧಿಸಲಾಗದೇ ಅರ್ಧದಷ್ಟು ಚಿತ್ರಮಂದಿರಗಳಿಂದ ಹೊರ ನಡೆಯುತ್ತಿದೆ. ಅನೂಪ್ ಭಂಡಾರಿಯಂತಹ ಯುವ, ಪ್ರತಿಭಾವಂತ ಕನ್ನಡಿಗನನ್ನು ಕನ್ನಡ … ಓದನ್ನು ಮುಂದುವರೆಸಿ